ನಟ ಸಾಮ್ರಾಟ ಏಣಗಿ ನಟರಾಜ ನೆನಪಿನಲ್ಲಿ - ‘ನಟ ಸಾಮ್ರಾಟ’
mail-img print-img

ನಟ ಸಾಮ್ರಾಟ ಏಣಗಿ ನಟರಾಜ ನೆನಪಿನಲ್ಲಿ - ‘ನಟ ಸಾಮ್ರಾಟ’

ಬುಧವಾರ - ಜುಲೈ -18-2012

ನಾಟಕ ವಿಮರ್ಶೆ: ಶಶಿಕಾಂತ ಯಡಹಳಿ ಸೃಷ್ಟಿ ಸಂಸ್ಥೆಯಲ್ಲಿ ಅಭಿನಯ ಕಲೆ ಕುರಿತು ತರಬೇತಿ ಪಡೆದು ರಂಗಭೂಮಿಯಲ್ಲಿ ತೊಡಗಿಸಿಕೊಂಡ ಹಲವು ಕ್ರಿಯಾಶೀಲ ಯುವಕರು ಒಂದೆಡೆ ಸೇರಿ ರಂಗಾವಿಷ್ಕಾರ ಎನ್ನುವ ಹೊಸ ರಂಗತಂಡವೊಂದನ್ನು ಹುಟ್ಟುಹಾಕಿದ್ದಾರೆ. ಜುಲೈ 16 ರಂದು ಈ ಹೊಸ ತಂಡದ ಉದ್ಘಾಟನಾ ಸಮಾರಂಭಕ್ಕೆ ರವೀಂದ್ರ ಕಲಾಕ್ಷೇತ್ರ ಸಾಕ್ಷಿಯಾಯಿತು. ರಂಗಾವಿಷ್ಕಾರ ತಂಡದ ಉತ್ಸಾಹಿ ಕಲಾವಿದರು ಕೃಷ್ಣಕುಮಾರ ಯಾದವ್‌ರವರ ನಿರ್ದೇಶನದಲ್ಲಿ ‘ನಟಸಾಮ್ರಾಟ’ ನಾಟಕವನ್ನು ಪ್ರದರ್ಶಿಸಿದರು. ಮರಾಠಿಯ ವಿ.ವಾ. ಶಿರವಾಡಕರ್ ಮರಾಠಿಯಲ್ಲಿ ರಚಿಸಿದ ನಟಸಾಮ್ರಾಟ ನಾಟಕವನ್ನು ಡಾ.ವಾಮನ ಬೇಂದ್ರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದೇ ನಟಸಾಮ್ರಾಟ ನಾಟಕದಲ್ಲಿ ಅಮೋಘವಾಗಿ ಅಭಿನಯಿಸಿ ಜನಮಣ್ಣನೆಗಳಿಸಿದ್ದ, ಇತ್ತೀಚೆಗೆ ನಿಧನ ರಾದ ಏಣಗಿ ನಟರಾಜ್‌ರವರಿಗೆ ಈ ನಾಟಕವನ್ನು ಸಮರ್ಪಿಸಿದ್ದು ತುಂಬಾ ಸೂಕ್ತವಾಗಿತ್ತು.

ಈ ನಾಟಕದ ಮೂಲಬೇರು ಇರುವುದು ಶೇಕ್ಸ್‌ಪೀಯರ್‌ನ ಕಿಂಗ್‌ಲಿಯರ್‌ನಲ್ಲಿ. ತನ್ನ ಇಡೀ ಸಾಮ್ರಾಜ್ಯವನ್ನು ತನ್ನನ್ನು ಬಣ್ಣಿಸಿದ ಎರಡೂ ಕುವರಿಯರಿಗೆ ಹಂಚಿದ ಕಿಂಗ್‌ಲಿಯರ್ ನಂತರ ಅದೇ ಮಕ್ಕಳಿಂದ ಪಡಬಾರದ ಕಷ್ಟ ಪಡುತ್ತಾನೆ. ಇದನ್ನೇ ಆಧರಿಸಿ ಶಿರವಾಡಕರ್‌ರವರು ವಿದೇಶಿ ಕಿಂಗ್‌ಲಿಯರನನ್ನು ನಟಸಾಮ್ರಾಟನನ್ನಾಗಿಸಿ ದೇಶಿ ಕರಿಸಿದ್ದಾರೆ. ಶೇಕ್ಸಪೀಯರ್‌ನ ಕಿಂಗ್‌ಲಿಯರನಲ್ಲಿ ಚಕ್ರವರ್ತಿ ಲಿಯರ್‌ನಂತಹ ಅಸಾಮಾನ್ಯ ರಾಜನೂ ತನ್ನದೇ ಕರುಳಿನ ಕುಡಿಗಳಿಂದ ನಿರ್ಲಕ್ಷಕ್ಕೆ ಒಳಗಾಗುತ್ತಾನೆ.

ಆದರೆ ಶಿರವಾಡಕರ್‌ರ ನಟಸಾಮ್ರಾಟದಲ್ಲಿ ರಂಗ ಭೂಮಿಯ ಸುಪ್ರಸಿದ್ಧ ಮೇರು ಕಲಾವಿದನೊಬ್ಬ ತನ್ನ ವೃದ್ಧಾಪ್ಯದಲ್ಲಿ ತನ್ನದೆಲ್ಲವನ್ನೂ ಮಗ-ಮಗಳಿಗೆ ಹಂಚಿ ಕೊನೆಗೆ ಅವರಿಂದಲೇ ನಿರ್ಲಕ್ಷಕ್ಕೊಳಗಾಗಿ ನೊಂದು ಕೊಂಡು ಸಾಯುತ್ತಾನೆ. ಈ ಹಣ, ಆಸ್ತಿ, ಅಂತಸ್ತುಗಳು ಅದು ಹೇಗೆ ಮನುಷ್ಯ ಸಂಬಂಧಗಳನ್ನು ಹಾಳು ಮಾಡುತ್ತವೆ ಎನ್ನುವುದನ್ನು ಮನಮುಟ್ಟುವಂತೆ ಅನಾವರಣಗೊಳಿಸುವ ಈ ನಾಟಕ ಕೊನೆಗೆ ಪ್ರೇಕ್ಷಕರಲ್ಲಿ ವಿಷಾದವನ್ನುಂಟುಮಾಡುವ ಮೂಲಕ ಹಿರಿಯ ನಾಗರಿಕರಲ್ಲಿ ಎಚ್ಚರಿಕೆಯನ್ನು ಹಾಗೂ ಯುವಕರಲ್ಲಿ ಅರಿವನ್ನೂ ಮೂಡಿಸುವಲ್ಲಿ ಸಫಲವಾಗಿದೆ.

ಇದೊಂದು ನಟ ಪ್ರಧಾನ ನಾಟಕ. ನಿರ್ದೇಶಕ ಅದೇನೇ ಕಸರತ್ತು ಮಾಡಿದರೂ ಪ್ರೇಕ್ಷಕರ ಗಮನ ಕೇಂದ್ರೀಕರಣಗೊಳ್ಳುವುದು ಅಪ್ಪಾಸಾಹೇಬ ಪಾತ್ರದ ಮೇಲೆಯೇ. ಇಡೀ ನಾಟಕವನ್ನು ಈ ಅಪ್ಪಾಸಾಹೇಬ ಪಾತ್ರ ಆವರಿಸಿಕೊಂಡು ಬಿಡುತ್ತಾನೆ. ತಾನು ಶ್ರೇಷ್ಠ ನಟನೆನ್ನುವ ಅಹಂಕಾರ ಹಾಗೂ ತನ್ನ ಮಕ್ಕಳು ಕೊನೆಯವರೆಗೂ ಆಜ್ಞಾಧಾರಕರಾಗಿಯೇ ಇರುತ್ತಾರೆ ಎನ್ನುವ ಅಂಧನಂಬಿಕೆಗಳಿಗೆ ಬಲಿಯಾಗುವ ಅಪ್ಪಾಸಾಹೇಬ ಪಾತ್ರಕ್ಕೆ ಜೀವತುಂಬಲು ಅಸಾಧ್ಯ ತಾಕತ್ತಿನ ನಟನೇ ಬೇಕಾಗುತ್ತದೆ.

ಕನ್ನಡ ರಂಗಭೂಮಿಯಲ್ಲಿ ಅಪ್ಪಾಸಾಹೇಬ ಪಾತ್ರದ ತುಮುಲಗಳನ್ನು ಮನಮಿಡಿಯುವಂತೆ ನಟಿಸಿ ತೋರಿಸಿದ್ದು ಏಣಗಿ ನಟರಾಜ ಮಾತ್ರ. ಅಪ್ಪಾಸಾಹೇಬ ಎನ್ನುವ ರಂಗಭೂಮಿಯ ನಟನ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಇಡೀ ನಾಟಕವನ್ನು ಪ್ರಸ್ತುತಪಡಿಸಲಾಗಿದೆ. ರಂಗದಂಗಳದಲ್ಲಿ ಸಾಮ್ರಾಟನಂತೆ ಮೆರೆದು ಜನಮನಗೆದ್ದ ನಟನೊಬ್ಬ ತನ್ನ ವೃದ್ಧಾಪ್ಯದಲ್ಲಿ ತನ್ನದೇ ಮಕ್ಕಳಿಂದ ಅಪಮಾನ ನೋವುಗಳನ್ನು ಅನುಭವಿಸುವ ರೀತಿ ಮನಮಿಡಿಯುವಂತಹುದು. ಒಟ್ಟಾರೆಯಾಗಿ ಈ ನಾಟಕದ ಎಲ್ಲಾ ವಿಭಾಗಗಳು ಒಂದಕ್ಕೊಂದು ಪೂರಕವಾಗಿ ಸ್ಪಂದಿಸಿದರೆ, ಯುವ ನಟರು ಇನ್ನೂ ಹೆಚ್ಚು ಪರಿಶ್ರಮ ಪಟ್ಟರೆ, ನಿರ್ದೇಶಕರು ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡರೆ ಈ ನಾಟಕ ಗಮನಾರ್ಹವಾಗಿ ಮೂಡಿ ಬರಬಹುದಾದ ಸಾಧ್ಯತೆ ಇದೆ.

ನಾಟಕ ಮಾಡುವ ತುಡಿತಕ್ಕೆ ಹೇಗೋ ನಾಟಕ ಮಾಡುವ ಬದಲಾಗಿ ಶತಾಯಗತಾಯ ಉತ್ತಮ ನಾಟಕವೊಂದನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ನಾಟಕದ ಎಲ್ಲಾ ವಿಭಾಗಗಳೂ, ಕಲಾವಿದರು ಹಾಗೂ ತಂತ್ರಜ್ಞರು ಒಂದಾಗಿ ಶ್ರಮಿಸಬೇಕಿದೆ. ಹೊಸ ತಂಡದಿಂದ, ಹೊಸ ಯುವ ಕಲಾವಿದರಿಂದ ಪ್ರೇಕ್ಷಕರು ಇದನ್ನು ಬಯಸುತ್ತಿದ್ದಾರೆ. ಹೊಸ ಮುಖಗಳು, ಹೊಸ ಪ್ರಯತ್ನಗಳು, ವೈವಿದ್ಯಮಯ ಪ್ರಯೋಗಗಳು ರಂಗಭೂಮಿಗೆ ಅಗತ್ಯವಾಗಿವೆ.

ಅಂತಹ ಅಗತ್ಯವನ್ನು ಪೂರೈಸುವ ಕ್ರಿಯಾಶೀಲ ಮನಸುಗಳು ವೃತ್ತಿಪರತೆಯನ್ನು ಮೈಗೂಡಿಸಿ ಕೊಂಡು ದೃಶ್ಯಕಾವ್ಯಗಳನ್ನು ಕಟ್ಟಿಕೊಡಬೇಕಿದೆ. ಆ ಮೂಲಕ ಕನ್ನಡ ರಂಗಭೂಮಿಯನ್ನು ಉಳಿಸಬೇಕಿದೆ, ಬೆಳೆಸಬೇಕಿದೆ. ಅನುಭವಿ ರಂಗಕರ್ಮಿಗಳು ಇಂತಹ ಹೊಸಬರ ಪ್ರಯತ್ನಗಳನ್ನು ಬೆನ್ನುತಟ್ಟಿ ತಿದ್ದಿ, ತೀಡಿ, ಮಾರ್ಗದರ್ಶನ ನೀಡಿ ಬೆಂಗಲಿಸಬೇಕಿದೆ.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಚರ್ಚ್‌ದಾಳಿ ಗೃಹ ಇಲಾಖೆಗೆ ಪಾಠವಾಗಲಿ

‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...


- ಬಿ.ಶ್ರೀಪಾದ ಭಟ್

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್