
ದಮಾಮ್, ಆ.5: ಕೆಎಸ್ಎ ದಮಾಮ್, ಖೋಬರ್ ಘಟಕದ ವತಿಯಿಂದ ದಮಾಮ್ ಸೆಂಟರ್ನಲ್ಲಿ ಆ.4ರಂದು ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು.
ಇಫ್ತಾರ್ ಕೂಟಕ್ಕೆ ದಮಾಮ್, ಖೋಬರ್, ಜುಬೈಲ್ಗಳಿಂದ ಬೃಹತ್ ಸಂಖ್ಯೆಯಲ್ಲಿ ಅತಿಥಿಗಳು ಆಗಮಿಸಿದರು. ಇಫ್ತಾರ್ಗೆ ಮುಂಚಿತವಾಗಿ ಅಬ್ದುಲ್ ಮಜೀದ್ ಎಸ್.ಎ ಬ್ಯಾರಿ ಭಾಷೆಯಲ್ಲಿ ಹಿತೋಪದೇಶ ನೀಡಿದರು. ಇಫ್ತಾರ್ನ ಬಳಿಕ ಮುಹಮ್ಮದ್ ಖಲೀಲ್ ಉರ್ದು ಭಾಷೆಯಲ್ಲಿ ಹಿತೋಪದೇಶಗಳನ್ನು ನೀಡಿದರು.
ಇದೇ ಸಂದರ್ಭ ಶೈಖ್ ಮುಹಮ್ಮದ್ ಜಮೀಲ್ ಝೈನ್ ರಚಿಸಿದ ‘ಸಂತಾನ ಪರಿಪಾಲನೆ’ ಎಂಬ ಪುಸ್ತಕವನ್ನು ಇಂಡಿಯನ್ ಇಸ್ಲಾಹಿ ಸೆಂಟರ್ನ ಸೌದಿ ಅರೇಬಿಯಾದ ಅಧ್ಯಕ್ಷ ಇಂಬಿಚ್ಚಿ ಕೋಯಾರವರು ಅಹ್ಮದ್ ಅಲ್ ಸಾದಿ (ಮ್ಯಾನೇಜಿಂಗ್ ಡೈರೆಕ್ಟರ್ ಆಫ್ ಜಿ ಮೀಡಿಯಾ)ಯವರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಿದರು.
ಈ ಕೃತಿಯನ್ನು ಅಬ್ದುಲ್ ಮಜೀದ್ ಎಸ್.ಎಂ ಕನ್ನಡಕ್ಕೆ ಅನುವಾದಿಸಿದ್ದಾರೆ. ಎಂ.ಎಚ್ ಅಬ್ದುಲ್ ಹಮೀದ್ ‘ಸಂತಾನ ಪರಿಪಾಲನೆ’ ಕೃತಿಯ ಬಗ್ಗೆ ಹಾಗೂ ಕೆ.ಎಸ್.ಎ. ದಮಾಮ್, ಖೋಬರ್ ಘಟಕದ ಚಟುವಟಿಕೆಗಳ ಬಗ್ಗೆ ಸೇರಿದ ಜನರ ಗಮನಕ್ಕೆ ತಂದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ಕೆ.ಎಸ್.ಎ ದಮಾಮ್ ಖೋಬರ್ ಘಟಕದ ಅಧ್ಯಕ್ಷ ಇಸ್ಮಾಯೀಲ್ ಬಬ್ಬುಕಟ್ಟೆ, ಕೆಎಸ್ಎ ದಮಾಮ್ ಖೋಬರ್ ಘಟಕದ ವೀಕ್ಲಿ ಕ್ಲಾಸ್ಗಳ ಬಗ್ಗೆ ಮತ್ತು ಮದ್ರಸಗಳ ಕುರಿತು ಮಾಹಿತಿ ನೀಡಿದರು.
ಶರೀಫ್ ಎಣ್ಣೆಹೊಳೆ ವಂದಿಸಿದರು.














ಹೊಸ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದ ನಂತೆ. ಅಧಿಕಾರಕ್ಕೇರಿದ ಉತ್ಸಾಹದಲ್ಲಿ, ಸಿದ್ದರಾಮಯ್ಯ ಇದೇ ಹಾದಿಯಲ್ಲಿ ಸಾಗುತ್ತಿ ದ್ದಾರೆಯೇ? ಮತ ಹಾಕಿದ ಜನರನ್ನು ಖ ...
Click here to post your views ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...