ಜಿನಿವಾ,ಎ.10:ವಿಶ್ವಸಂಸ್ಥೆ ಹಾಗೂ ಅರಬ್ ಲೀಗ್ನ ಪ್ರತಿನಿಧಿ ಕೋಫಿ ಅನ್ನಾನ್ ಸಿರಿಯ ಬಿಕ್ಕಟ್ಟಿಗೆ ಸಂಬಂಧಿಸಿ ಭದ್ರತಾಮಂಡಳಿಗೆ ಪತ್ರವೊಂದನ್ನು ರವಾನಿಸಲಿದ್ದಾರೆ ಎಂದು ಅನ್ನಾನ್ ವಕ್ತಾರ ತಿಳಿಸಿದ್ದಾರೆ.‘‘ಕದನ ವಿರಾಮದ ಜಾರಿಗೆ ಅಂತಿಮ ಗಡುವಾಗಿರುವ ಗುರುವಾರಕ್ಕೆ ಮುನ್ನವೇ ಉದ್ವಿಗ್ನ ಪ್ರದೇಶಗಳಿಂದ ಸರಕಾರಿ ಸೇನಾ ಪಡೆಗಳನ್ನು ಹಿಂದೆಗೆಯುವುದಾಗಿ ಅನ್ನಾನ್ರೊಂದಿಗಿನ ಮಾತುಕತೆ ವೇಳೆ ಸಿರಿಯ ಆಡಳಿತ ಒಪ್ಪಿಕೊಂಡಿದೆ’’ ಎಂದು ವಕ್ತಾರ ಅಹ್ಮದ್ ಫೌಝಿ ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸಿರಿಯ ಆಡಳಿತವು ಇನ್ನೂ ಹಲವು ಪ್ರದೇಶಗಳಿಂದ ತನ್ನ ಸೇನಾಪಡೆಗಳನ್ನು ಹಿಂದೆಗೆಯಬೇಕಾಗಿದೆ ಎಂದು ಇದೇ ವೇಳೆ ಬ್ರಿಟನ್ ಮೂಲದ ಸಿರಿಯದ ಮಾನವ ಹಕ್ಕು ಸಂಘಟನೆ ಹೇಳಿಕೊಂಡಿದೆ. ಕಳೆದ ಮಾರ್ಚ್ನಲ್ಲಿ ಪ್ರಾರಂಭಗೊಂಡ ಸಿರಿಯದಲ್ಲಿನ ಸಂಘರ್ಷದ ಪರಿಣಾಮ ನಿರಾಶ್ರಿತರಾಗಿರುವ ಸುಮಾರು 25 ಸಾವಿರ ಜನರು ಪ್ರಸಕ್ತ ಸಿರಿಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಟರ್ಕಿಯ ಮೂರು ಪ್ರಾಂತಗಳಲ್ಲಿ ಶಿಬಿರ ಹೂಡಿದ್ದಾರೆ ಎಂದವರು ವಿವರಿಸಿದ್ದಾರೆ. ವಿಶ್ವಸಂಸ್ಥೆ ಒದಗಿಸಿರುವ ಅಂಕಿಅಂಶಗಳ ಪ್ರಕಾರ ಸಿರಿಯ ಹಿಂಸಾಚಾರಕ್ಕೆ ಇದುವರೆಗೆ ಸುಮಾರು ಒಂಭತ್ತು ಸಾವಿರಕ್ಕೂ ಅಧಿಕ ಜನರು ಪ್ರಾಣ ತೆತ್ತಿದ್ದಾರೆ.
ಕೊನೆಗೂ 17 ವರ್ಷದ ಜೆಡಿಯು-ಬಿಜೆಪಿ ನಡುವಿನ ಮೈತ್ರಿ ಮುರಿದಿದೆ. ನರೇಂದ್ರ ಮೋದಿಯ ಕೈಗೆ ಬಿಜೆಪಿಯ ನೇತೃತ್ವವನ್ನು ಕೊಟ್ಟ ಬೆನ್ನಿಗೇ ಇದು ನಡೆದಿದ ...
Click here to post your views ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...
1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...