ಹೊಸದಿಲ್ಲಿ, ಜೂ.19: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಬಿಂಬಿಸಲು ಯತ್ನಿಸುತ್ತಿರುವಾಗಲೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್ಡಿಎಯ ಪ್ರಧಾನಿ ಅಭ್ಯರ್ಥಿ ‘ಜಾತ್ಯತೀತ ವ್ಯಕ್ತಿತ್ವ’ ಉಳ್ಳವರಾಗಿರಬೇಕೆಂದು ಹೇಳುವ ಮೂಲಕ ಇಂದು ಅದಕ್ಕೆ ಅಂಕುಶವೊಂದನ್ನು ತೊಡಿಸಿದ್ದಾರೆ.
ನಿತೀಶ್ ನೀಡಿರುವ ಹೇಳಿಕೆ ಎನ್ಡಿಎಯೊಳಗೆ ತಳಮಳವನ್ನು ಹುಟ್ಟಿಸಿದೆ. ಬಿಜೆಪಿಯ ಕೆಲವು ಮುಖಂಡರು ಈ ಹೇಳಿಕೆಗೆ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.ನಿತೀಶ್ರ ಅಭಿಪ್ರಾಯವನ್ನಿಂದು ಬಿಹಾರದ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಬೆಂಬಲಿಸಿದುದು ಗಮನಾರ್ಹವಾಗಿದೆ. ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ‘ಸಮಾಜದ ಎಲ್ಲ ವರ್ಗಗಳಿಗೂ ಸ್ವೀಕಾರಾರ್ಹನಾಗಿರಬೇಕು’ ಎಂದವರು ಹೇಳಿದ್ದಾರೆ. ಭಾರತವು ಹಲವು ಮತಗಳು ಹಾಗೂ ಹಲವು ಭಾಷೆಗಳ ದೇಶವಾಗಿದ್ದು, ಅದರ ನಾಯಕ ತನ್ನ ವ್ಯಕ್ತಿತ್ವದಲ್ಲಿ ಕಲೆ ಹೊಂದಿರ ಬಾರದೆಂದು ನಿತೀಶ್ ಕುಮಾರ್ ಅಭಿಪ್ರಾಯಿಸಿದ್ದಾರೆ.
2014ರ ಚುನಾವಣೆಗೆ ಸಾಕಷ್ಟು ಮೊದಲೇ ಎನ್ಡಿಎ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬೇಕು. ಇದರಿಂದ ತಾವು ಯಾರಿಗೆ ಮತ ನೀಡಲಿದ್ದೇವೆಂದು ಮತದಾರರಿಗೆ ತಿಳಿಯುತ್ತದೆ ಎಂದ ಅವರು,ತಾನು ಪ್ರಧಾನಿ ಪದವಿಯ ಆಕಾಂಕ್ಷಿಯಲ್ಲವೆಂದು ಒತ್ತಿ ಹೇಳಿದ್ದಾರೆ.ಬಿಹಾರದಂತಹ ಅಭಿವೃದ್ಧಿಯಾಗದ ರಾಜ್ಯಗಳ ಸ್ಥಿತಿಗತಿ ಅರಿತುಕೊಂಡಿರುವ ನಾಯಕನೊಬ್ಬನನ್ನು ಎನ್ಡಿಎ ಹೊಂದಬೇಕು.
ಈ ನಾಯಕ ಮೈತ್ರಿಕೂಟದ ಪ್ರತಿ ಅಂಗಪಕ್ಷಕ್ಕೆ ಸ್ವೀಕಾರಾರ್ಹನಾಗಿರಬೇಕು. ಮೈತ್ರಿ ಕೂಟದ ನಾಯಕ ಜಾತ್ಯತೀತನಾಗಿರ ಬೇಕೆಂಬುದು ತನ್ನ ಬಯಕೆಯಾಗಿದೆಯೆಮದು ನಿತೀಶ್ ತಿಳಿಸಿದ್ದಾರೆ.ಎನ್ಡಿಎಯ ನಾಯಕ ಅಭಿವೃದ್ಧಿ ಹೊಂದಿರುವ ರಾಜ್ಯಗಳನ್ನು ಅಭಿವೃದ್ಧಿಪಡಿಸುವಂತಹವನಿರಬಾರದು.ಬದಲಿಗೆ ಅಭಿವೃದ್ಧಿ ಹೊಂದಿಲ್ಲದ ರಾಜ್ಯಗಳ ಭಾವನೆ ಅರಿಯುವಂತಹ ವ್ಯಕ್ತಿಯಾಗಿರಬೇಕೆಂದು ಅವರು ಅಭಿಪ್ರಾಯಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಲ್ಪಡುತ್ತಿರುವಾಗಲೇ ನಿತೀಶ್ ಕುಮಾರ್ರ ಈ ಹೇಳಿಕೆ ಹೊರ ಬಿದ್ದಿರುವುದು ಗಮನಾರ್ಹವಾಗಿದೆ.ಪ್ರಧಾನಿ ಅಭ್ಯರ್ಥಿಯು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಅತ್ಯಂತ ನಂಬುಗೆಯುಳ್ಳವನಾಗಿರಬೇಕೆಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...