ಮುಂಬೈ, ಜು.9: ಗುಜರಾತ್ನ ಬೆಸ್ಟ್ ಬೇಕರಿ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಇಂದು ಸಾಕ್ಷಗಳ ಕೊರತೆಯಿಂದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.ವಿಚಾರಣಾ ನ್ಯಾಯಾಲಯದ ವಿರುದ್ಧ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಎಂ.ಕಾನಡೆ ಹಾಗೂ ಪಿ.ಡಿ.ಕೋಡೆಯವರಿದ್ದ ವಿಭಾಗೀಯ ಪೀಠವೊಂದು ತೀರ್ಪನ್ನು ಮರು ಪರಿಶೀಲಿಸಿ ಜು.3ರಂದು ಸಂಜಯ್ ಠಕ್ಕರ್, ಬಹಾದ್ದೂರ್ ಸಿಂಗ್ ಚೌಹಾಣ್, ಸನಾಭಾಯಿ ಬರಿಯಾ ಹಾಗೂ ದಿನೇಶ್ ರಾಜಭರ್ ಎಂಬವರ ಜೀವಾವಧಿ ಶಿಕ್ಷೆಯನ್ನಷ್ಟೇ ಎತ್ತಿ ಹಿಡಿಯಿತು. ನ್ಯಾಯ ಮೂರ್ತಿಗಳು ದಂಗೆಯಲ್ಲಿ ಗಾಯಗೊಂಡಿದ್ದ ನಾಲ್ವರು ಬೆಸ್ಟ್ ಬೇಕರಿ ನೌಕರರ ಸಾಕ್ಷವನ್ನು ನಂಬಿದೆ. ಅವರು ಆರೋಪಿಗಳನ್ನು ಗುರುತಿಸಿದ್ದರು. ಹಾಗೂ ಈ ಆರೋಪಿಗಳು ದಂಗೆಯ ವೇಳೆ ಮಾರಕಾಯುಧಗಳೊಂದಿಗೆ ಸ್ಥಳದಲ್ಲಿದ್ದರೆಂದು ಸಾಕ್ಷ ನುಡಿದಿದ್ದರು.
ಆದಾಗ್ಯೂ, ವಿಚಾರಣಾ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದ ಹೈಕೋರ್ಟ್ ಪೀಠ, ರಾಜುಭಾಯಿ ಬರಿಯಾ, ಪಂಕಜ್ ಗೋಸಾವಿ, ಜಗದೀಶ್ ರಾಜಪುತ್, ಸುರೇಶ್ ಅಲಿಯಾಸ್ ಲಾಲೊ ದೇವಜಿ ಭಾಯಿ ವಾಸವ ಹಾಗೂ ಶೈಲೇಶ್ ತಡ್ರಿ ಎಂಬವರನ್ನು ಸಾಕ್ಷಗಳ ಕೊರತೆಯ ಕಾರಣ ಬಿಡುಗಡೆಗೊಳಿಸಿದೆ.2002ರ ಗುಜರಾತ್ ದಂಗೆಯ ವೇಳೆ ವಡೋದರಾದ ಬೆಸ್ಟ್ ಬೇಕರಿಯಲ್ಲಿ ದುಷ್ಕರ್ಮಿಗಳು 14 ಮಂದಿಯನ್ನು ಸಜೀವವಾಗಿ ದಹಿಸಿದ್ದರು.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...