ಮುಂಬೈ, ಜು.9: ಗುಜರಾತ್ನ ಬೆಸ್ಟ್ ಬೇಕರಿ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಇಂದು ಸಾಕ್ಷಗಳ ಕೊರತೆಯಿಂದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.ವಿಚಾರಣಾ ನ್ಯಾಯಾಲಯದ ವಿರುದ್ಧ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಎಂ.ಕಾನಡೆ ಹಾಗೂ ಪಿ.ಡಿ.ಕೋಡೆಯವರಿದ್ದ ವಿಭಾಗೀಯ ಪೀಠವೊಂದು ತೀರ್ಪನ್ನು ಮರು ಪರಿಶೀಲಿಸಿ ಜು.3ರಂದು ಸಂಜಯ್ ಠಕ್ಕರ್, ಬಹಾದ್ದೂರ್ ಸಿಂಗ್ ಚೌಹಾಣ್, ಸನಾಭಾಯಿ ಬರಿಯಾ ಹಾಗೂ ದಿನೇಶ್ ರಾಜಭರ್ ಎಂಬವರ ಜೀವಾವಧಿ ಶಿಕ್ಷೆಯನ್ನಷ್ಟೇ ಎತ್ತಿ ಹಿಡಿಯಿತು. ನ್ಯಾಯ ಮೂರ್ತಿಗಳು ದಂಗೆಯಲ್ಲಿ ಗಾಯಗೊಂಡಿದ್ದ ನಾಲ್ವರು ಬೆಸ್ಟ್ ಬೇಕರಿ ನೌಕರರ ಸಾಕ್ಷವನ್ನು ನಂಬಿದೆ. ಅವರು ಆರೋಪಿಗಳನ್ನು ಗುರುತಿಸಿದ್ದರು. ಹಾಗೂ ಈ ಆರೋಪಿಗಳು ದಂಗೆಯ ವೇಳೆ ಮಾರಕಾಯುಧಗಳೊಂದಿಗೆ ಸ್ಥಳದಲ್ಲಿದ್ದರೆಂದು ಸಾಕ್ಷ ನುಡಿದಿದ್ದರು.
ಆದಾಗ್ಯೂ, ವಿಚಾರಣಾ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದ ಹೈಕೋರ್ಟ್ ಪೀಠ, ರಾಜುಭಾಯಿ ಬರಿಯಾ, ಪಂಕಜ್ ಗೋಸಾವಿ, ಜಗದೀಶ್ ರಾಜಪುತ್, ಸುರೇಶ್ ಅಲಿಯಾಸ್ ಲಾಲೊ ದೇವಜಿ ಭಾಯಿ ವಾಸವ ಹಾಗೂ ಶೈಲೇಶ್ ತಡ್ರಿ ಎಂಬವರನ್ನು ಸಾಕ್ಷಗಳ ಕೊರತೆಯ ಕಾರಣ ಬಿಡುಗಡೆಗೊಳಿಸಿದೆ.2002ರ ಗುಜರಾತ್ ದಂಗೆಯ ವೇಳೆ ವಡೋದರಾದ ಬೆಸ್ಟ್ ಬೇಕರಿಯಲ್ಲಿ ದುಷ್ಕರ್ಮಿಗಳು 14 ಮಂದಿಯನ್ನು ಸಜೀವವಾಗಿ ದಹಿಸಿದ್ದರು.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಕಳಂಕಿತರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಭೇಷ್ ಅನಿಸಿಕೊಂಡ ಸಿದ್ದು, ಖಾತೆ ಹಂಚಿಕೆಯಲ್ಲ ...
ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...