=ಚಲಾವಣೆಯಲ್ಲಿರುವ ನಾಲ್ಕಾಣೆ ನಾಣ್ಯ ಎಂದು ಸದಾನಂದ ಗೌಡರು ನಕ್ಕರಂತೆ.
*ಬೊಕ್ಕಸದ ಹಣದಲ್ಲಿ ಶಾಸಕರು ವಿದೇಶ ಪ್ರವಾಸ ಹೋಗಿರುವುದು ತಪ್ಪು.
=ಬೊಕ್ಸಸದಾದರೇನು, ಅವರ ಮನೆಯ ತಿಜೋರಿಯದ್ದಾದರೇನು, ಜನರ ಹಣವೇ ಅಲ್ಲವೆ?
*ಕಾಂಗ್ರೆಸ್ನಿಂದ ಮಾತ್ರ ಜನರ ಸಮಸ್ಯೆ ದೂರ.
=ಸದ್ಯಕ್ಕೆ ಕಾಂಗ್ರೆಸ್ನ ಸಮಸ್ಯೆ ದೂರ ಮಾಡುವವರಾರು, ಎನ್ನುವುದನ್ನು ಯೋಚಿಸಿ.
*ಈಗಿನ ಪರಿಸ್ಥಿತಿಯಲ್ಲಿ ವಿದೇಶಕ್ಕೆ ಅಷ್ಟೇ ಅಲ್ಲ, ಹೊರ ರಾಜ್ಯಗಳಿಗೂ ಶಾಸಕರು ಹೋಗಬಾರದು.
=ಅಂದರೆ ಮತ್ತೆ ರೆಸಾರ್ಟ್ಗೆ ಹೋಗುವ ದಿನ ಹತ್ತಿರ ಬಂತೆ?
*ರಾಜ್ಯದಲ್ಲಿ ಉಗ್ರರನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ.
=ಚುನಾವಣೆ ಹತ್ತಿರ ಬರುತ್ತಿರುವ ಸೂಚನೆಯೆ?
*ದೇಶದ ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ.
=ಮೋದಿ ಜೈಲು ಸೇರುವವರೆಗೆ ನಿಮ್ಮ ಮಾತನ್ನು ಒಪ್ಪುವ ಹಾಗಿಲ್ಲ.
*ಮೊದಲು ಅತಿ ಭ್ರಷ್ಟರನ್ನು ಹೊರಕ್ಕೆ ಕಳುಹಿಸಬೇಕು. ಇದಕ್ಕಾಗಿ ಕಡಿಮೆ ಭ್ರಷ್ಟರೊಡನೆ ಕೈಜೋಡಿಸಬೇಕು.
=ಅಡಿಕೆ ಕದ್ದವನು ಕಳ್ಳ, ಆನೆ ಕದ್ದವನೂ ಕಳ್ಳ.
*ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬಾರದಂತೆ ಮಡೆಸ್ನಾನ ಸಮಸ್ಯೆ ಪರಿಹರಿಸಲಾಗುವುದು.
=ಪರಿಹರಿಸುವುದಕ್ಕಿಂತ ನಿಷೇಧಿಸುವುದೇ ಅರ್ಥಪೂರ್ಣವಲ್ಲವೆ?
*ಜಾತಿ, ಧರ್ಮದ ಮೇಲೆ ಓಟಿನ ಬೇಟೆ ಇಂದಿನ ರಾಜಕೀಯ ದುಸ್ಥಿತಿಗೆ ಕಾರಣ.
=ಬೇಟೆಯಾಡುವ ಶಕ್ತಿ ಕುಂದಿದ ಪುತ್ತೂರಿನ ಬೆಕ್ಕು ಸನ್ಯಾಸಿಯಾಯಿತಂತೆ.
*ಎಬಿವಿಪಿ ಕೇಸ್ ವಾಪಸ್ ಆತುರದ ನಿರ್ಧಾರ.
=ಚುನಾವಣೆ ಕೆಲಸಕ್ಕೆ ಜನ ಬೇಕಲ್ಲ, ಅದಕ್ಕೇ ಆತುರ.
*ನನ್ನ ಕೈಗೆ ಸೇನೆ ಕೊಡಿ, ಪವಾಡ ನೋಡಿ.
=ಯಾವ ಸೇನೆ? ರಾಮ ಸೇನೆಯೋ, ಶಿವಸೇನೆಯೋ?
*ಸಾಂಸ್ಕೃತಿಕ ಮೌಲ್ಯಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.
=ವಂಚನೆಯನ್ನೇ ಸಾಂಸ್ಕೃತಿಕ ಮೌಲ್ಯವೆಂದು ನಿಮ್ಮಂಥವರು ಕಲಿಸಲು ಹೊರಡುತ್ತಿರುವಾಗ ಅವರದರಿಂದ ದೂರವಿರುವುದೇ ಒಳಿತು.
*ವಿದೇಶದಲ್ಲಿ ವ್ಯಾಸಂಗ ಮಾಡಿದ ವೈದ್ಯರಿಗೆ ದೇಶದಲ್ಲಿ ಅವಕಾಶ.
=ದೇಶದ ಕಾಲೇಜುಗಳ ಮೇಲೆ ನಂಬಿಕೆಯಿಲ್ಲವೆ?
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...