mail-img print-img

* ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಮುಖ್ಯ

ಸೋಮವಾರ - ಜೂನ್ -18-2012

 -ಮೋಟಮ್ಮ, ವಿಧಾನಪರಿಷತ್ ಪ್ರತಿಪಕ್ಷ ನಾಯಕಿ

 = ಆದ್ದರಿಂದಲೇ ಹೆಚ್ಚಿನ ಫುಡಾರಿಗಳು ವಿಶ್ವಾಸದ್ರೋಹದ ಧೋರಣೆಯಲ್ಲಿ ಅಚಲ ನಂಬಿಕೆ ಇಟ್ಟಿರುತ್ತಾರೆ.  


* ನ್ಯಾಯಾಲಯದ ಎಲ್ಲ ತೀರ್ಪಿಗೂ ನಮ್ಮ ಕುಟುಂಬ ತಲೆಬಾಗುತ್ತದೆ.

- ಶ್ರೀರಾಮುಲು, ಶಾಸ

 = ಬೇರೆ ಆಯ್ಕೆಯೇನಾದರೂ ಉಳಿದಿದೆಯೇ?


* ನನ್ನ ಗಂಡ ಸೂಪರ್.

- ಸಾನಿಯಾ ಮಿರ್ಜಾ, ಭಾರತದ ಟೆನಿಸ್ ತಾರೆ

 =ದಾಂಪತ್ಯದ ಆರಂಭದ ದಿನದಲ್ಲಿ ಹಾಗೆಲ್ಲಾ ಅನಿಸುವುದುಂಟು.


* ನರೇಂದ್ರ ಮೋದಿ ಓರ್ವ ರಾಕ್ಷಸ.

-ಕೇಶುಭಾಯಿ ಪಟೇಲ್, ಬಿಜೆಪಿ ಮಾಜಿ ನಾಯಕ

=ಆತನನ್ನು ನೇತಾರನ ಸ್ಥಾನಕ್ಕೇರಿಸಿದ ಪಕ್ಷವನ್ನು ಏನೆಂದು ಕರೆಯುತ್ತೀರಿ?


* ಪ್ರಧಾನಿ ಮನಮೋಹನ್ ಸಿಂಗ್ ನಗಲೂ ಆಗದಷ್ಟು ಒತ್ತಡದಲ್ಲಿದ್ದಾರೆ.

- ಬಾಬಾ ರಾಮ್‌ದೇವ್, ಯೋಗಗುರು

 =ಧರ್ಮಗುರುಗಳು ವಿದೂಷಕರಾಗಿ ನಗಿಸಲು ಇಳಿದಿರುವುದು ನಗುವ ವಿಷಯವೇ?


* ನಾನು ರಾಷ್ಟ್ರದ್ರೋಹಿಯಾಗಿದ್ದರೆ (ಸರಕಾರ) ನನ್ನನ್ನು ಜೈಲಿಗೆ ತಳ್ಳಲಿ.

- ಅಣ್ಣಾ ಹಝಾರೆ, ಗಾಂಧಿವಾದಿ

=ಅಷ್ಟು ದೊಡ್ಡ ಅಪರಾಧಕ್ಕೆ ಇಷ್ಟು ಸಣ್ಣ ಶಿಕ್ಷೆ ಸಾಕೇ?


* ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರು ಹರಕೆಯ ಕುರಿಗಳಾಗುತ್ತಿದ್ದಾರೆ.

- ರೋಶನ್ ಬೇಗ್, ಕಾಂಗ್ರೆಸ್ ಶಾಸಕ

=ಧಾಟಿ ನೋಡಿದರೆ, ಯಾವುದೋ ಹೊಸ ಹುದ್ದೆಗಾಗಿ ಚೌಕಾಶಿ ಆರಂಭಿಸಿರುವ ಹಾಗಿದೆಯಲ್ಲಾ!


* ಹಣಕ್ಕೆ ಬೆಲೆ ನೀಡಿದರೆ ರಾಜಕಾರಣಿಗಳಿಗೆ ಬೆಲೆ ಸಿಗುವುದಿಲ್ಲ.

- ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

=ಆದರೂ ಅತ್ಯಧಿಕ ಬೆಲೆಕೊಟ್ಟು ರಾಜಕಾರಣಿಗಳನ್ನು ಖರೀದಿಸುತ್ತಿರುವ ಪಕ್ಷ ನಿಮ್ಮದೇ ತಾನೇ?


* ಶ್ರೀರಾಮುಲು ಅವರಿಗೆ ಉಜ್ವಲ ಭವಿಷ್ಯವಿದೆ.

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

 =ತಾವು ಜ್ಯೋತಿಷ್ಯ ವೃತ್ತಿಗೆ ಇಳಿದಿದ್ದು ಯಾವಾಗಿನಿಂದ ಸ್ವಾಮೀ?  


* ಕೊಳೆತ ಹಣ್ಣುಗಳ ಬುಟ್ಟಿಯಲ್ಲಿ ಒಳ್ಳೆಯ ಹಣ್ಣುಗಳನ್ನು ಹೆಚ್ಚುದಿನ ಇಡಬಾರದು.

 

- ಸಿ.ಟಿ. ರವಿ, ಶಾಸಕ

 = ನೀವಿರುವ ಬುಟ್ಟಿಯಲ್ಲಿನ ಎಲ್ಲ ಹಣ್ಣುಗಳೂ ಕೊಳೆತಿರುವುದರಿಂದ ಇದು ನೀವು ಚಿಂತಿಸಬೇಕಾದ ಸಮಸ್ಯೆ ಅಲ್ಲ. 


* ನನಗೂ ಮುಖ್ಯಮಂತ್ರಿಯಾಗುವ ಆಸೆಯಿದೆ.

- ಡಾ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

=ಆ ಸ್ವಾರ್ಥಕ್ಕಾದರೂ ಈಗಾಗಲೇ ಗುಜರಿಯಾಗಿರುವ ನಿಮ್ಮ ಪಕ್ಷವನ್ನು ಬಲಪಡಿಸಲು ಸ್ವಲ್ಪ ಶ್ರಮಿಸಿ ಸಾರ್.


*ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಅಡ್ಡಮತ ಹಾಕಿದ ಬಿಜೆಪಿ ಶಾಸಕರು ಯಾರ್ಯಾರು ಎಂಬುದು ನನಗೆ ಗೊತ್ತಿದೆ.

- ರೇಣುಕಾಚಾರ್ಯ, ಅಬಕಾರಿ ಸಚಿವ

 =ನೀವು ಅಡ್ಡ ಹಾದಿಯ ಪರಮ ತಜ್ಞರೆಂಬುದು ಗುಟ್ಟೇನೂ ಅಲ್ಲ.



 ಪಿ.ಎ.ರೈ

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್