=ಮುಖ್ಯಮಂತ್ರಿ ಸ್ಥಾನ ಕೈ ತಪ್ಪುವುದು ಮೊದಲೇ ಗೊತ್ತಿದ್ದರೆ ಮಾಡಿ ಬಿಡುತ್ತಿದ್ದಿರಿ ಅಲ್ಲವೆ?
*ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರೂ ರೇಸ್ನಲ್ಲಿಲ್ಲ.
=ಎಲ್ಲರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರೇಸ್ನಲ್ಲೇ ಇದ್ದಾರೆ.
*ಕಾಶ್ಮೀರ ವಿವಾದಕ್ಕೆ ಹೊರಗಿನವರು ಪರಿಹಾರ ಸೂಚಿಸಲು ಸಾಧ್ಯವಿಲ್ಲ.
=ಸದ್ಯಕ್ಕೆ ಕಾಶ್ಮೀರಿಗಳನ್ನು ಬಿಟ್ಟರೆ ಎಲ್ಲರೂ ಹೊರಗಿನವರೇ.
*ನಾನು ಯಾರ ಕೈಗೊಂಬೆಯೂ ಅಲ್ಲ.
=ಬಹುಶಃ ಯಡಿಯೂರಪ್ಪರ ಕಾಲ್ ಗೊಂಬೆಯಾಗಿರಬಹುದು.
*ಜೆಡಿಎಸ್ ಒಡೆಯಲು ಕಾಂಗ್ರೆಸ್ ನಾಯಕರು ಸಂಚು ರೂಪಿಸಿದ್ದರಿಂದಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಯಿತು.
=ಕಾಂಗ್ರೆಸ್ ನಾಯಕರು ಇನ್ನೊಮ್ಮೆ ಅಂತಹದೇ ಸಂಚು ರೂಪಿಸಲಿ ಎಂಬ ಆಸೆ ನಿಮಗೆ ಒಳಗೊಳಗೆ ಇರುವುದು ಬಿಜೆಪಿಗೆ ಗೊತ್ತಾಗಿ ಬಿಟ್ಟಿದೆ.
*ನಮ್ಮ ಕುಟುಂಬಕ್ಕೆ ಯಾವುದೋ ಶಾಪ ತಟ್ಟಿದೆ. ಮುಸ್ಲಿಂ ಧರ್ಮದ ಎಲ್ಲ ಗುರುಗಳು ಆಶೀರ್ವಾದ ಮಾಡುವ ಮೂಲಕ ಶಾಪದಿಂದ ಮುಕ್ತಿ ನೀಡಬೇಕು.
=ಬಹುಶಃ ಮತದಾರರ ಶಾಪವಿರಬಹುದು.
*ಹೈಕಮಾಂಡ್ ಸೂಚಿಸಿದರೆ ರಾಜ್ಯ ಕಾಂಗ್ರೆಸ್ ನಾಯಕತ್ವ ವಹಿಸಿಕೊಳ್ಳಲು ಸಿದ್ಧ
=ಅಂತೂ ರಾಜ್ಯದ ಜನರು ಇನ್ನೊಂದು ಮಹಾಕಾವ್ಯವನ್ನು ಓದಲು ಸಿದ್ಧರಾಗಲೇಬೇಕು.
*ನಾವು ಅತೃಪ್ತರಲ್ಲ, ನೊಂದವರು.
=ಹಾಗಾದರೆ ನಾಡಿನ ಜನತೆಯೇ ಅತೃಪ್ತರಾಗಿರಬಹುದೆ?
*ಮೋದಿ ಹೀಟ್ಲರ್ ಇದ್ದಂತೆ
=ಅದನ್ನು ಕೇಳಿ ಮೋದಿ ಸಂಭ್ರಮಿಸಿದರಂತೆ.
*ಬರ ಪರಿಹಾರದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ.
=ನಿಮ್ಮ ನಿಜ ತಾಯಿ ಸುಷ್ಮಾ ಸ್ವರಾಜ್ ರಾಜ್ಯದಿಂದ ದೋಚಿದ ಹಣವಿದೆಯಲ್ಲ ಅದನ್ನೇ ಬಳಸಿಕೊಳ್ಳಿ.
*ಮಕ್ಕಳು ತಪ್ಪು ಮಾಡಿದ್ದಾರೆ ಎಂದರೆ, ಅಪ್ಪ ಅವರನ್ನು ಸರಿಯಾಗಿ ಬೆಳೆಸಿಲ್ಲ ಎಂದರ್ಥ. ಹೀಗಾಗಿ ಅಪ್ಪನಿಗೆ ಶಿಕ್ಷೆ ವಿಧಿಸಬೇಕು
=ಪೊಲೀಸ್ ನಿಮ್ಮ ತಂದೆಯವರನ್ನು ಹುಡುಕುತ್ತಿದ್ದಾರಂತೆ.
*ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆಬರುತ್ತದೆ, ಆಗ ನಾನು ಸಚಿವೆ ಆಗ್ತೇನೆ
=ಯಾರೋ ನಿಮ್ಮನ್ನು ಜುಲೈ ತಿಂಗಳಲ್ಲಿ ಎಪ್ರಿಲ್ ಫೂಲ್ ಮಾಡಿದ್ದಾರೆ.
*ಯೋಗ ಈ ದೇಶವನ್ನು ನಿರೋಗಿ ಮಾಡಲು ಇರುವ ದಿವ್ಯಾಸ್ತ್ರ
=ನಿಮ್ಮಂತಹ ಹತ್ತು ಹಲವು ರೋಗಗಳಿಗೆ ಶಸ್ತ್ರ ಚಿಕಿತ್ಸೆಯೇ ಬೇಕಾಗುತ್ತದೆ ಸ್ವಾಮೀಜಿ.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...