ಅಂಕಣ

mail-img print-img

ಪೂಜೆಯಿಂದ ಅಸ್ಸಾಂನಲ್ಲಿ ರಕ್ತದ ಮಳೆಯಾಗಿದೆ...!

ರವಿವಾರ - ಜುಲೈ -29-2012

ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಕೊಡೆ ಹಿಡಿದುಕೊಂಡು ಉಡುಪಿಯಲ್ಲಿ ಓಡಾಡುತ್ತಿದ್ದರು. ಬಹುಶಃ ಬಿಸಿಲಿಗಾಗಿ ಕೊಡೆ ಹಿಡಿದಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಪತ್ರಕರ್ತ ಎಂಜಲು ಕಾಸಿ ಮೆಲ್ಲಗೆ ಆ ಕೊಡೆಯಲ್ಲಿ ಸೇರಿಕೊಂಡ ‘‘ಸಾರ್ ನಾನು ಸಾರ್...ಪತ್ರಕರ್ತ ಎಂಜಲು ಕಾಸಿ...ತುಂಬಾ ಬಿಸಿಲಲ್ವಾ ಸಾರ್...’’
ಖೋಟಾ ಶ್ರೀನಿವಾಸ ಪೂಜಾರಿಯವರು ಸಿಟ್ಟಾದರು ‘‘ಎಂತ ಬಿಸಿಲು ನಿಮ್ಮ ಕರ್ಮ. ಇದು ಬಿಸಿಲ, ಮಳೆಯಲ್ಲವಾ? ಮಳೆಗಾಗಿ ಕೋಟ್ಯಂತರ ಖರ್ಚು ಮಾಡಿ ಪೂಜೆ ಮಾಡಿದ್ದೇವೆ. ಹೊರಗಡೆ ಧಾರಾಕಾರ ಮಳೆ ಸುರೀತಾ ಉಂಟು... ನೀವು ಬಿಸಿಲು ಎಂದು ಹೇಳುತ್ತೀರಾಲ್ಲ...ಮಂಡೆ ಸರಿ ಇಲ್ವಾ....’’ ಒದ್ದೆ ಹಣೆಯನ್ನು ಒರೆಸಿಕೊಂಡರು. ಹನಿಗಳು ಪಟಪಟನೆ ತೊಟ್ಟಿಕ್ಕಿತು. ಅವರ ಅಂಗಿ, ಲುಂಗಿ ಕೂಡ ಒದ್ದೆಯಾಗಿತ್ತು.
‘‘ಸಾರ್ ಅದು ಮಳೆಹನಿಯಲ್ಲ, ಬೆವರ ಹನಿ ಸಾರ್...’’ ಕಾಸಿ ಗೊಂದಲದಲ್ಲಿ ಹೇಳಿದ.
‘‘ಎಂತ ಮಾರ್ರೆ...ಬಿಜೆಪಿ ಸರಕಾರವನ್ನು ಹೀಗೂ ಟೀಕಿಸುವುದಾ...ಪೂಜಾರಿಗಳು ಮಳೆ ಬರುತ್ತದೆ ಎಂದ ಮೇಲೆ ಮುಗಿಯಿತು...’’ ಖೋಟಾ ನುಡಿದರು.
‘‘ಯಾವ ಪೂಜಾರಿ ಸಾರ್? ಜನಾರ್ದನ ಪೂಜಾರಿಯ?’’ ಕಾಸಿ ಕೇಳಿದ.
‘‘ನಿಮಗೆಂತ ತಲೆಕೆಟ್ಟಿದೆಯಾ? ಅವರು ಬರೇ ಬಿಲ್ಲವರಿಗೆ ಮಾತ್ರ ಪೂಜಾರಿ. ನಾನು ದೇವಸ್ಥಾನದ ಪೂಜಾರಿಗಳ ವಿಷಯ ಹೇಳಿದ್ದು. ಅವರಿಗೆ ದುಡ್ಡಿನ ಮಳೆ ಸುರಿದಿದ್ದೇವೆ. ಅದಕ್ಕಾಗಿ ಪೂಜೆ ಮಾಡಿದ್ದಾರೆ. ಆದುದರಿಂದ ಮಳೆ ಬರಲೇ ಬೇಕು. ಅದಕ್ಕಾಗಿಯೇ ಅಲ್ಲವಾ ನಾನು ಕೊಡೆ ಹಿಡಿದು ತಿರುಗಾಡುತ್ತಿರುವುದು...ಸರಕಾರಿ ಪೂಜೆಗಾಗಿ ಮಾತ್ರ ಹಣಕೊಟ್ಟದ್ದಲ್ಲ...ಜೋರಾಗಿ ಮಳೆ ಬರುತ್ತದಲ್ಲ...ಅದಕ್ಕಾಗಿ ಕೊಡೆಯನ್ನು ಕೂಡ ಇಡೀ ರಾಜ್ಯದ ಪೂಜಾರಿಗಳಿಗೆ ವಿತರಣೆ ಮಾಡಿದ್ದೇನೆ....’’
‘‘ಸಾರ್ ನೀವು ಪೂಜಾರಿಗಳು ಅನ್ನುವಾಗ ಸ್ವಲ್ಪ ಗೊಂದಲ...ನೀವು ಕೂಡ ಪೂಜಾರಿ ಅಲ್ಲವಾ...’’ ಕಾಸಿ ಹಲ್ಲು ಕಿರಿದ.
‘‘ನಿಮ್ಮ ತಲೆ...ನಾನು ಹೇಳುವುದು ಕೃಷ್ಣ ಮಠದ ಪೂಜಾರಿಗಳ ಬಗ್ಗೆ....ಅವರ ದೇವಸ್ಥಾನದ ಪೂಜಾರಿಗಳು. ನಾವು ಬರೇ ಖಾಲಿ ಪೂಜಾರಿಗಳು...ಬರೇ ಪೂಜಾರಿಗಳಿಗೆ ಮಾತ್ರ ಕೊಡೆ ಕೊಡುವುದಕ್ಕೆ ನಾನೇನು ಜಾತೀವಾದಿಯಲ್ಲ...’’
‘‘ಸಾರ್ ಕೊಡೆ ಮಡಚಿ ಸಾರ್. ಮಳೆಯಲ್ಲೇ ನೆಂದು ಹೋಗುವ...’’ ಕಾಸಿ ಸಲಹೆ ನೀಡಿದ.
‘‘ಹೌದಲ್ಲ...ಮಳೆಯಲ್ಲಿ ನೆನೆದುಕೊಂಡು ಹೋಗುವುದಕ್ಕೆ ತುಂಬಾ ಕುಸಿಯಾಗುತ್ತದೆ’’ ಎನ್ನುತ್ತಾ ಕೊಡೆ ಮಡಚುವುದಕ್ಕೆ ಮುಂದಾದರು. ಆದರೆ ಅಷ್ಟರಲ್ಲಿ ಬಿಸಿಲ ಝಳ ಅವರ ನೆತ್ತಿಯ ಮೇಲೆ ಹೊಡೆಯಿತು ‘‘ಓಹ್ ಮಳೆ ಭಾರೀ ಜೋರುಂಟು ಮಾರ್ರೆ...ಒಟ್ಟಿನಲ್ಲಿ ನಮ್ಮ ಮುಜರಾಯಿ ಇಲಾಖೆ ಹಣ ಬಿಡುಗಡೆ ಮಾಡಿದ್ದರಿಂದ ಇದೊಂದು ಒಳ್ಳೆದಾಯಿತು ನೋಡಿ....’’
‘‘ಸಾರ್...ಹಾಗಾದರೆ ಮೋಡ ಬಿತ್ತನೆಗೂ ಈ ಮಳೆ ಪೂಜೆಗೂ ಏನು ವ್ಯತ್ಯಾಸ?’’ ಕಾಸಿ ಕೇಳಿದ.
‘‘ಯತ್ಯಾಸ ಎಂತದು ಮಣ್ಣು...ಅದರಲ್ಲಿ ವಿಜ್ಞಾನಿಗಳಿಗೆ ಹಣ ಹೋಗ್ತದೆ...ಇದರಲ್ಲಿ ಪಾಪ ಪೂಜಾರಿಗಳಿಗೆ ಅಂದರೆ ದೇವಸ್ತಾನದ ಪೂಜಾರಿಗಳಿಗೆ ಹೋಗ್ತದೆ. ಅಷ್ಟೇ ವ್ಯತ್ಯಾಸ. .’’
‘‘ಸಾರ್...ಮಳೆಗಾಗಿ ಸರಕಾರಿ ಪೂಜೆ ಮಾಡಿದ ಎಲ್ಲೂ ಪೂಜಾರಿಗಳು ತಮ್ಮನ್ನು ಸರಕಾರಿ ನೌಕರರೆಂದು ಗುರುತಿಸಬೇಕು ಎಂದು ಕೇಳುತ್ತಿದ್ದಾರಂತೆ ಹೌದಾ?’’ ಕಾಸಿ ಚುಚ್ಚಿದ.
‘‘ಕೇಳಿದರೆ ಕೇಳಲಿ ಮಾರಾಯರೆ...ನಿಮ್ಮದೇನು ಗಂಟು ಹೋಯಿತು? ಪೂಜೆಯೂ ಸರಕಾರಿ ಕೆಲಸವೇ ಅಲ್ಲವಾ....ಸರಕಾರಿ ಕೆಲಸ ದೇವರ ಕೆಲಸ ಅಂದ ಮೇಲೆ ದೇವರ ಕೆಲಸ ಸರಕಾರಿ ಕೆಲಸ ಅಲ್ಲವಾ? ಆದುದರಿಂದ ಇನ್ನು ಮುಂದೆ ನಾವು ದೇವಸ್ಥಾನದ ಎಲ್ಲ ಪೂಜಾರಿಗಳನ್ನು ಸರಕಾರಿ ನೌಕರರೆಂದು ನೇಮಕ ಮಾಡುತ್ತೇವೆ...ಅವರ ಕೆಲಸವನ್ನು ಶೀಘ್ರದಲ್ಲೇ ಖಾಯಂ ಮಾಡುವ ಉದ್ದೇಶ ಉಂಟು...’’
‘‘ಸಾರ್...ಹಾಲಾಡಿ...ಶ್ರೀನಿವಾಸ ಶೆಟ್ಟಿ....’’ ಎಂದು ಕಾಸಿ ಬಾಯಿತೆರೆದದ್ದೇ ಖೋಟಾ ಶ್ರೀನಿವಾಸರು ಸಿಟ್ಟಾದರು ‘‘ಅವರು ಹಾಲಾಡಿಯಲ್ಲ, ನನ್ನ ಪಾಲಿಗೆ ಹಾಳಾಡಿ...ಅವರ ವಿಷಯ ಯಾಕೆ ಈಗ?’’
‘‘ಅವರು ಕುಂದಾಪುರದ ವಾಜಪೇಯಿಯಂತೆ ಹೌದಾ?’’
‘‘ಅದಕ್ಕೆ ನಾನೇನು ಮಾಡುವುದು? ಬೇಕಾದರೆ ಅವರನ್ನು ಪ್ರಧಾನಮಂತ್ರಿ ಮಾಡಲಿ. ನಾನೇನು ಬೇಡ ಅನ್ನುತ್ತೇನಾ? ಸಚಿವ ಸ್ಥಾನ ಸಿಗಲಿಲ್ಲ ಅಂತ ಅವರು ನನ್ನ ಮೇಲೆ ಕಾರ್ಗಿಲ್ ಯುದ್ಧ ಮಾಡುವುದು ಸರಿಯ?’’
‘‘ಸಚಿವ ಸ್ಥಾನ ಸಿಗಬೇಕಾದರೆ ಪ್ರಭಾಕರ ಭಟ್ಟರ ಕಾಲು ಹಿಡಿಯುವುದು ಅನಿವಾರ್ಯವಂತೆ...ನೀವೇನಾದರೂ ಹಿಡಿದಿದ್ದೀರಾ...?’’ ಕಾಸಿ ಮೆಲ್ಲಗೆ ಬುದ್ಧಿ ತೋರಿಸಿದ.
‘‘ನನಗೆ ಸಿಟ್ಟು ಬರುತ್ತದೆ...ಭಟ್ಟರ ಕಾಲು ಹಿಡಿದರೆ ಅದರಲ್ಲಿ ನಮಗೆ ಪುಣ್ಯ ಉಂಟು ಗೊತ್ತುಂಟ. ಒಂದು ವೇಳೆ ನಾವು ಕಾಲು ಮುಟ್ಟಲು ಹಿಂದೇಟು ಹಾಕಿದರೆ ಅದು ಅಸ್ಪಶತೆ ಆಗುವುದಿಲ್ಲವಾ...ಭಟ್ಟರು ಅಂತ ನಾವು ಕಾಲು ಮುಟ್ಟದೆ ಭೇದಭಾವ ತೋರಿಸುವುದಕ್ಕಾಗುತ್ತದ? ಅದು ಜಾತೀಯವಾದವಲ್ಲವ?’’
‘‘ನಿಮ್ಮ ಮುಂದಿನ ಕಾರ್ಯಕ್ರಮಗಳು ಏನೇನು ಎನ್ನುವುದನ್ನು ಹೇಳುತ್ತೀರಾ....’’
‘‘ಕಾರ್ಯಕ್ರಮ ತುಂಬಾ ಉಂಟು ಮಾರೆಯರೆ...ಆದರೆ ದೊಡ್ಡ ತಲೆಬಿಸಿಯೆಂದರೆ ಸರಕಾರ ಎಷ್ಟರವರೆಗೆ ಉಳಿಯುತ್ತದೆ ಎಂದು ಗೊತ್ತಿಲ್ಲ...ತುಂಬಾ ಪೂಜೆ ಕಾರ್ಯಕ್ರಮ ಮಾಡ್ಲಿಕ್ಕೆ ಉಂಟು. ಮುಖ್ಯವಾಗಿ ನಮ್ಮ ಸರಕಾರಕ್ಕೆ ಯಾರೋ ಮಾಟ ಮಾಡಿದ್ದಾರೆ. ಅದಕ್ಕಾಗಿ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವುದಕ್ಕೆ ಒಂದು ಆದೇಶ ಹೊರಡಿಸುತ್ತೇನೆ...ಆಮೇಲೆ, ಹಾಲಾಡಿಯವರು ಪಕ್ಷದಲ್ಲೇ ಉಳಿದು, ಪ್ರಭಾಕರ ಭಟ್ಟರತ್ರ ಕ್ಷಮೆಯಾಚಿಸಬೇಕು ಎಂದು ಎಲ್ಲ ದೇವಾಸ್ಥಾನಗಳಲ್ಲಿ ಪೂಜೆ ಮಾಡಿಸುವುದಕ್ಕೆ ಈಗಾಗಲೇ ಆದೇಶ ಹೊರಡಿಸಿದ್ದೇನೆ. ಅದು ಸ್ವಲ್ಪ ಮಟ್ಟಿಗೆ ಪ್ರಯೋಜನಕ್ಕೆ ಬಂದಿದೆ...ಈಗ ಮೊದಲಿನ ಹಾಗೆ ಅವರು ಮಂಡೆಬೆಚ್ಚದಿಂದ ಮಾತನಾಡುವುದಿಲ್ಲ...ರೈತರ ಆತ್ಮಹತ್ಯೆ ತಡೆಯುವುದಕ್ಕೆ, ರಾಜ್ಯದಲ್ಲಿ ಬಡತನ ನಿವಾರಣೆ ಮಾಡುವುದಕ್ಕೆ ಪೂಜೆ ಮಾಡುವ ಕಾರ್ಯಕ್ರಮ ಉಂಟು. ಅದಕ್ಕಾಗಿ ಎಲ್ಲ ದೇವಸ್ಥಾನಗಳಿಗೆ ಕೆಲವು ಕೋಟಿ ಬಿಡುಗಡೆ ಮಾಡಬೇಕೂಂತ ಉಂಟು...’’
‘‘ಬಿಜೆಪಿಯ ವರಿಷ್ಠರಿಗೆ, ನಾಯಕರಿಗೆ ಬುದ್ಧಿ ಕೊಡ್ಲಿಕ್ಕೆ ಪೂಜೆ ಮಾಡಿಸಬಹುದಲ್ಲ ಸಾರ್?’’
‘‘ಮೊದಲು ಪತ್ರಕರ್ತರ ಮಂಡೆ ಸರಿಯಾಗಲಿ ಅಂತ ಪೂಜೆ ಮಾಡಿಸ್ಲಿಕ್ಕೆ ಉಂಟು. ಬಳಿಕ ನಮ್ಮ ನಾಯಕರಿಗೆ ಬುದ್ಧಿ ಕೊಡ್ಲಿಕ್ಕೆ ಪೂಜೆ ಮಾಡಿಸ್ತೇನೆ...ಆಗಬಹುದಾ...?’’ ಎಂದು ಒಮ್ಮೆಲೆ ಖೋಟಾ ಸಚಿವರು ಸಿಟ್ಟಾಗಿ ತನ್ನ ಕೊಡೆಯನ್ನು ಮಡಿಚಿದರು.
ಅಷ್ಟರಲ್ಲಿ ಯಾರದೋ ಫೋನ್ ಬಂತು. ಅದರಲ್ಲಿ ಮಾತನಾಡಿದ್ದೆ ಪೂಜಾರಿಯವರು ಖುಷಿಯಾದರು ‘‘ನೋಡ್ರಿ ಕಾಶಿಯವರೆ...ಮಳೆಯಾಗಿದೆ...ನಮ್ಮ ಪೂಜೆಯಿಂದ ಈಶಾನ್ಯ ಭಾರತದ ಅಸ್ಸಾಂನಲ್ಲಿ ಭಾರೀ ರಕ್ತದ ಮಳೆಯಾಗಿದೆ...ಇನ್ನೇನು ಅದು ಕರ್ನಾಟಕಕ್ಕೆ ಬರುವ ಸಾಧ್ಯತೆ ಇದೆಯಂತೆ...’’
ಆ ಗುಡುಗಿಗೆ ಪತ್ರಕರ್ತ ಕಾಸಿ ನಿಂತಲ್ಲೇ ಸಣ್ಣಗೆ ನಡುಗಿದ.

chelayya@gmail.com

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್