ಅಂಕಣ

mail-img print-img

ಡೌನ್‌ಲೋಡ್ ಅನ್ನು ತ್ವರಿತಗೊಳಿಸುವುದು

ರವಿವಾರ - ಆಗಸ್ಟ್ -05-2012

ಬಹಳ ದಿನಗಳಿಂದ ಇಂಟರ್‌ನೆಟ್ ಬಳಸುತ್ತಿರುವ ಎಲ್ಲರಿಗೂ ಒಂದು ಸಮಸ್ಯೆ ಕಾಡುತ್ತಿರುತ್ತದೆ. ಅದೆಂದರೆ, ಸಾಫ್ಟ್‌ವೇರ್ ಬಂಡಲ್, ಮ್ಯೂಸಿಕ್ ಅಥವಾ ಮೂವಿಗಳಂತಹ ಬೃಹತ್ ಗಾತ್ರದ ಫೈಲುಗಳನ್ನು ಯಾವುದಾದರೂ ವೆಬ್‌ಸೈಟಿನಿಂದ ಡೌನ್‌ಲೋಡ್ ಮಾಡುವಾಗ ಬಹಳ ಸಮಯ ತೆಗೆದುಕೊಳ್ಳುವುದು. ಈಗಿನ ಕಾಲವೇ ಹಾಗೆ, ಎಲ್ಲವೂ ವೇಗವಾಗಿ ನಡೆಯಬೇಕು. ಐದೈದು ದಿನ ಕುಳಿತುಕೊಂಡು ಟೆಸ್ಟ್  ಕ್ರಿಕೆಟ್ ನೋಡುವ ವ್ಯವಧಾನ ಈಗಿಲ್ಲ. ಕನಿಷ್ಠ ಒಂದು ದಿನ ಕುಳಿತುಕೊಂಡು ಏಕದಿನ ಪಂದ್ಯ ನೋಡುವುದೂ ಕಷ್ಟ. ಈಗೇನಿದ್ದರೂ ಟಿ-೨೦ ಯುಗ. ವಾಸ್ತವದಲ್ಲಿ ಇದು ಇಂದಿನ ಕಾಲದ ನಮ್ಮ ಮನಸ್ಥಿತಿಯನ್ನು ಮಾರ್ಮಿಕವಾಗಿ ವಿವರಿಸುತ್ತದೆ. ಹದಿನೈದು ವರ್ಷಗಳ ಹಿಂದೆ ಇಂಟರ್‌ನೆಟ್ ಬಳಕೆ ಸಾರ್ವಜನಿಕವಾಗಿ ಬೆಳೆಯಲಾರಂಭಿಸಿದಾಗ ಒಟ್ಟಾರೆ ಇಂಟರ್‌ನೆಟ್‌ನ ವೇಗವೇ ಕಡಿಮೆ ಇತ್ತು. ಒಂದು ವೆಬ್‌ಸೈಟಿನ ಪುಟ ತೆರೆಯಬೇಕಾದರೆ ನಾವು ಮೌಸ್ ಬಟನ್ ಒತ್ತಿ ಕಂಪ್ಯೂಟರ್ ಪರದೆಯನ್ನು ರಕ್ಷಿಸುತ್ತಾ ಪುಟ ತೆರೆಯುವುದನ್ನು ಕಾಯುತ್ತಾ ಕುಳಿತುಕೊಳ್ಳಬೇಕಿತ್ತು.

ಡೈಲ್‌ಅಪ್ ಕನೆಕ್ಷನ್‌ಗಳ ಜಾಗದಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ ಬಂದಿದ್ದೇ ಒಂದು ದೊಡ್ಡ  ಕ್ರಾಂತಿಯನ್ನೇ ಹುಟ್ಟು ಹಾಕಿತು. ಡೈಲ್‌ಅಪ್ ಕನೆಕ್ಷನ್‌ಗಳಲ್ಲಿ ನೀವು ಇಂಟರ್‌ನೆಟ್ ಸಂಪರ್ಕ ಹೊಂದಿದಾಕ್ಷಣದಿಂದ ನಿಮ್ಮ ಫೋನ್ ಎಂಗೇಜ್ ಆಗಿಬಿಡುತ್ತಿತ್ತು. ಅಂದರೆ, ಇಂಟರ್‌ನೆಟ್ ಬಳಕೆ ಮಾಡುತ್ತಿದ್ದ ಸಮಯದಲ್ಲಿ ಆ ಫೋನಿನಿಂದ ಕಾಲ್ ಮಾಡುವುದಾಗಲೀ ಅಥವಾ ಸ್ವೀಕರಿಸುವು ದಾಗಲೀ ಮಾಡುವುದು ಆಗುತ್ತಿರಲಿಲ್ಲ.

ಅಲ್ಲದೇ, ಗಂಟೆಗಳ ಲೆಕ್ಕದಲ್ಲಿ ಇಂಟರ್‌ನೆಟ್ ಬಳಕೆಯಿದ್ದ ಕಾಲವದು. ನಿಮ್ಮ ಕಂಪ್ಯೂಟರ್ ಎಷ್ಟು ಹೊತ್ತು ಇಂಟರ್‌ನೆಟ್ ಸಂಪರ್ಕದಲ್ಲಿರುತ್ತಿತ್ತೋ ಅಷ್ಟು ಅವಧಿಗೆ ಹಣ ಪಾವತಿಸಬೇಕಿತ್ತು. ಇಂಟರ್‌ನೆಟ್ ಕನೆಕ್ಟ್ ಮಾಡಿ ಮರೆತು ಮಲಗಿದರೆ ಮುಗಿಯಿತು. ಮುಂದಿನ ಟೆಲಿಫೋನ್ ಬಿಲ್ ನಿಮ್ಮ ಜೇಬು ಕತ್ತರಿಸಿ ಬಿಡುತ್ತಿತ್ತು. ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕದ ಆವಿಷ್ಕಾರದೊಂದಿಗೆ ಈ ಎರಡೂ ಸಮಸ್ಯೆಗಳು ಕೊನೆಯಾದವು. ವೊದಲನೆಯದಾಗಿ ಇಂಟರ್‌ನೆಟ್ ವೇಗದ್ದು. ಡೈಲ್‌ಅಪ್ ಕನೆಕ್ಷನ್‌ಗೆ ಹೋಲಿಸಿದರೆ ಬ್ರಾಡ್‌ಬ್ಯಾಂಡ್ ಭಾರೀ ವೇಗವನ್ನು ಹೊಂದಿದೆ. ಲಿಂಕಿನ ಮೇಲೆ ಕ್ಲಿಕ್ ಮಾಡಿ ಕಾಯುತ್ತಾ ಕುಳಿತುಕೊಳ್ಳವ ಪ್ರಮೇಯ ಉಳಿಯಲಿಲ್ಲ. ಸಾಮಾನ್ಯ ವೆಬ್‌ಪುಟಗಳಾದರೆ ಒಂದೆರಡು ಸೆಕೆಂಡುಗಳಲ್ಲಿ ತೆರೆದುಕೊಂಡು ಬಿಡಲಾರಂಭಿಸಿದವು. ಅಂತೆಯೇ ಗಂಟೆಗಳ ಲೆಕ್ಕದಲ್ಲಿ ಇಂಟರ್‌ನೆಟ್ ಬಳಸುವ ಯುಗವೂ ಬ್ರಾಡ್‌ಬ್ಯಾಂಡ್‌ನೊಂದಿಗೆ ಕೊನೆಗೊಂಡಿತು. ಬದಲಿಗೆ ಒಟ್ಟು ಡೌನ್‌ಲೋಡ್/ಅಪ್‌ಲೋಡ್ ದತ್ತಾಂಶದ ಪ್ರಮಾಣದ ಆಧಾರದಲ್ಲಿ ಶುಲ್ಕ ನಿಗದಿಯಾಗುವುದು ರೂಢಿಗೆ ಬಂತು.

ಇಂಟರ್‌ನೆಟ್ ಸೇವೆ ಒದಗಿಸುವ ಕೆಲವೊಂದು ಕಂಪೆನಿಗಳು ನಿರ್ದಿಷ್ಟ ಶುಲ್ಕಕ್ಕೆ ಅನಿಯಮಿತ ಬಳಕೆಯನ್ನೂ ಪ್ರಾರಂಭಿಸಿದವು.ಈಗ ಹೆಚ್ಚಿನ ಪ್ರಮಾಣದಲ್ಲಿರುವುದು ಅನಿಯಮಿತ (ಅನ್‌ಲಿಮಿಟೆಡ್) ಬಳಕೆಯ ಇಂಟರ್‌ನೆಟ್ ಸಂಪರ್ಕಗಳೇ. ಎರಡನೆಯದಾಗಿ ಯಾವ ಫೋನಿನಿಂದ ಇಂಟರ್‌ನೆಟ್ ಸಂಪರ್ಕ ಪಡೆದುಕೊಂಡಿರುತ್ತೇವೋ ಆ ಫೋನ್ ಎಂಗೇಜ್ ಆಗುವುದಿಲ್ಲ. ಒಂದೆಡೆ ಇಂಟರ್‌ನೆಟ್ ಬಳಸು ತ್ತಲೇ ಇನ್ನೊಂದೆಡೆ ಫೋನ್ ಕೂಡ ಉಪಯೋಗಿಸಬಹುದು.

ಈಗ ಮೂರನೆ ಕ್ರಾಂತಿಯೂ ಶುರುವಾಗಿದೆ. ಅದು ತ್ರೀಜಿ ಕ್ರಾಂತಿ. ಡೈಲ್‌ಅಪ್ ಕನೆಕ್ಷನ್‌ಗೆ ಹೋಲಿಸಿ ದರೆ ಬ್ರಾಡ್‌ಬ್ಯಾಂಡ್ ಸುಮಾರು ಹತ್ತುಪಟ್ಟು ವೇಗ ವಾಗಿತ್ತು. ಅದೇ ರೀತಿ ಬ್ರಾಡ್ ಬ್ಯಾಂಡ್‌ಗೆ ಹೋಲಿಸಿದರೆ ತ್ರೀಜಿ ಸುಮಾರು ಇಪ್ಪತ್ತರಿಂದ ಮೂವತ್ತು ಪಟ್ಟು ವೇಗವಾಗಿದೆ. ಅಂದರೆ, ಟೆಸ್ಟ್‌ನಿಂದ ಏಕದಿನ, ನಂತರ ಟಿ-೨೦ ಕ್ರಿಕೆಟ್ ರೀತಿಯಲ್ಲಿ!ಸದ್ಯಕ್ಕೆ ಈ ತ್ರೀಜಿ ಸಂಪರ್ಕದ ಬಹುದೊಡ್ಡ ಸಮಸ್ಯೆ ಎಂದರೆ ಆ ಸೇವೆಯನ್ನು ಪಡೆಯುವುದಕ್ಕೆ ತಗುಲುವ ದುಬಾರಿ ಬೆಲೆ! ಪ್ರತಿ ಸೆಕೆಂಡಿಗೆ ೫೧೨ ಕೆ.ಬಿ ಡೌನ್‌ಲೋಡ್/ಅಪ್‌ಲೋಡ್ ಸಾಮರ್ಥ್ಯ ಇರುವ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆದರೆ ಅನಿಯಮಿತವಾಗಿ ಉಪಯೋಗಿಸಿದರೂ ತಿಂಗಳಿಗೆ ಸುಮಾರು ೮೦೦ ರೂಪಾಯಿ ಖರ್ಚಾಗುತ್ತದೆ. ಆದರೆ, ೩ಜಿ ಅಪ್‌ಲೋಡ್ ಡೌನ್‌ಲೋಡ್ ವೇಗ ಸುಮಾರು ೨೧ ಎಂ.ಬಿ.ಗಳ ತನಕ ಇರುತ್ತದೆ. ಸುಮಾರು ೨ ಜಿಬಿ ದತ್ತಾಂಶ ಬಳಕೆಗೆ ಒಂದು ಸಾವಿರ ರೂಪಾಯಿ ಖರ್ಚಾಗುತ್ತದೆ.

ಸಾರಾಂಶದಲ್ಲಿ ಹೇಳುವುದಾದರೆ ೩ಜಿ ಮೇನಿಯ ನಿಧಾನಕ್ಕೆ ಪ್ರಾರಂಭವಾಗಿರುವುದು ನಿಜವಾದರೂ ಅದಿನ್ನೂ ಸಾಮಾನ್ಯ ಜನರ ಕೈಗೆ ಎಟುಕುತ್ತಿಲ್ಲ. ಹದಿನೈದು-ಇಪ್ಪತ್ತು ಸಾವಿರ ಆದಾಯವಿರುವ ನೌಕರನೊಬ್ಬ ತನ್ನ ಮನೆಯಲ್ಲಿ ಅನಿಯಮಿತವಾಗಿ ೩ಜಿ ಇಂಟರ್‌ನೆಟ್ ಬಳಸುವುದಕ್ಕೆ ಸಾಧ್ಯವಿಲ್ಲ. ಸದ್ಯದಲ್ಲಿ ಅದು ಸರಕಾರ, ಬೃಹತ್ ಖಾಸಗಿ-ಸರಕಾರಿ ಕಂಪೆನಿಗಳು, ದೊಡ್ಡ ದೊಡ್ಡ ಸಂಸ್ಥೆಗಳು, ದೊಡ್ಡ ಆದಾಯ ಪಡೆಯುವ ಜನ ಮಾತ್ರವೇ ಉಪಯೋಗಿಸುವ ಸೇವೆಯಾಗಿ ಉಳಿದುಕೊಂಡಿದೆ. ಇತ್ತೀಚೆಗೆ ಬಿಎಸೆನ್ನೆಲ್ ಜನಸಾಮಾನ್ಯರಿಗೂ ೩ಜಿ ಸೇವೆ ಕೈಗೆಟುಕುವಂತಹ ಕೆಲವು ಯೋಜನೆಗಳನ್ನು ಪ್ರಟಿಸಿದೆಯಾದರೂ ಅದೂ ತೃಪ್ತಿಕರವಾಗಿಲ್ಲ. ಪರ್ಸನಲ್ ಕಂಪ್ಯೂಟರುಗಳಲ್ಲಿ ಅನಿಯಮಿತ ದತ್ತಾಂಶ ಅಪ್‌ಲೋಡ್/ಡೌನ್‌ಲೋಡ್‌ಗೆ ಅವಕಾಶವಿರುವ ೩ಜಿ ಸೇವೆಗೆ ಪ್ರತೀ ತಿಂಗಳಿಗೆ ೭೦೦-೮೦೦ ರೂಪಾಯಿ ಖರ್ಚಾಗುವಂತಾದರೆ ಅದು ಜನಸಾಮಾನ್ಯರಿಗೆ ಎಟಕುವ ಸೇವೆ ಎನ್ನಬಹುದು. ಸದ್ಯದಲ್ಲೇ ಅದೂ ಬರುತ್ತದೆ.

ಅಲ್ಲಿಯವರೆಗೆ? ಅಲ್ಲಿಯವರೆಗೆ ಇರುವ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕದಲ್ಲೇ ಹೆಚ್ಚು ವೇಗವಾಗಿ ಕಾರ್ಯ ನಿರ್ವಹಿಸುವಂತಹ ಕೆಲವು ತಂತ್ರಗಳನ್ನು ಕಲಿತುಕೊಳ್ಳಬೇಕಷ್ಟೆ. ಸಾಮಾನ್ಯ ವೆಬ್‌ಪುಟಗಳನ್ನು ತೆರೆಯುವಾಗ ಸಾಮಾನ್ಯವಾಗಿ ವೇಗದ ಸಮಸ್ಯೆ ಎದುರಾಗುವುದಿಲ್ಲ. ಅದು ಎದುರಾಗುವುದು ಈಗಾಗಲೇ ಹೇಳಿದಂತೆ ಬೃಹತ್ ಫೈಲುಗಳನ್ನು ಡೌನ್‌ಲೋಡ್ ಮಾಡುವಾಗ. ಅದು ಮ್ಯೂಸಿಕ್ ಫೈಲ್ ಇರಬಹುದು, ಮೂವಿ ಫೈಲ್ ಇರಬಹುದು ಅಥವಾ ಬೃಹತ್ ಸಾಫ್ಟ್‌ವೇರ್ ಬಂಡಲ್ ಇರಬಹುದು. ಅಂತಹ ಸಂದರ್ಭದಲ್ಲಿ ವೇಗವಾಗಿ ಹೇಗೆ ಫೈಲುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಕೆಲವು ತಂತ್ರಗಳನ್ನು ಅನುಸರಿಸಬೇಕು. ಅವುಗಳ ಬಗ್ಗೆ ಮುಂದಿನವಾರ ಚರ್ಚಿಸೋಣ.
 

xsangeetax@gmail.com



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಪಾಪಿ ಕಾಲಿಟ್ಟಲ್ಲೆಲ್ಲ ಮೊಣಕಾಲು ನೀರು

ಕೊನೆಗೂ 17 ವರ್ಷದ ಜೆಡಿಯು-ಬಿಜೆಪಿ ನಡುವಿನ ಮೈತ್ರಿ ಮುರಿದಿದೆ. ನರೇಂದ್ರ ಮೋದಿಯ ಕೈಗೆ ಬಿಜೆಪಿಯ ನೇತೃತ್ವವನ್ನು ಕೊಟ್ಟ ಬೆನ್ನಿಗೇ ಇದು ನಡೆದಿದ ...


ನಿಮ್ಮ ಅನಿಸಿಕೆ

postClick here to post your views
EPAPER
access

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್

ಬೌದ್ಧ ಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್

1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...


- -ರಘೋತ್ತಮ ಹೊ.ಬ., ಚಾಮರಾಜನಗರ