ಚೆನ್ನೈ: ನಿತ್ಯಾನಂದನ ಆಶ್ರಮಕ್ಕೆ ಬೆಂಕಿ

ಚೆನ್ನೈ, ಜೂ.20: ರಾಜ್ಯಪಾಳ್ಯಂ, ಜೂ.20: ಮಧುರೈನ ಆಧೀನಂ ಪೀಠದ ಉತ್ತರಾಧಿಕಾರಿಯಾಗಿರುವ ನಿತ್ಯಾನಂದ ಸ್ವಾಮಿಯನ್ನು ಕೂಡಲೇ ಆ ಸ್ಥಾನದಿಂದ ವಜಾಗೊಳಿಸಬೇಕೆಂದು ತಮಿಳುನಾಡಿನಲ್ಲೂ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯಪಾಳ್ಯಂನಲ್ಲಿರುವ ನಿತ್ಯಾನಂದನ ಆಶ್ರಮಕ್ಕೆ ಬುಧವಾರ ಬೆಂಕಿ ಹಚ್ಚಲಾಗಿದೆ.

ಇಲ್ಲಿನ ವಿರುಂದ್ ನಗರ್ ಜಿಲ್ಲೆಯ ರಾಜ್ಯಪಾಳ್ಯಂನಲ್ಲಿರುವ ನಿತ್ಯಾನಂದನ ಆಶ್ರಮಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಲಾಗಿದೆ. ಈ ಘಟನೆಯ ಹಿಂದೆ ಯಾರಿದ್ದಾರೆ ಅಥವಾ ಆಶ್ರಮವಾಸಿಗಳೇ ಈ ಕೃತ್ಯ ಎಸಗಿದ್ದಾರೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯಪಾಳ್ಯಂನಲ್ಲಿರುವ ಆಶ್ರಮಕ್ಕೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ನಿತ್ಯಾನಂದ ಸ್ವಾಮಿ ಅಲ್ಲಿ ಇರಲಿಲ್ಲವೆನ್ನಲಾಗಿದ್ದು, ಈತ ಮಧುರೈನ ಆಧೀನಂ ಪೀಠದಲ್ಲಿ ಇದ್ದಿರುವುದಾಗಿ ವರದಿ ತಿಳಿಸಿದೆ.