ಮುಂಬೈ, ಮೇ 15: ಜನಪ್ರಿಯ ತಾರೆ ಆಮಿರ್ ಖಾನ್ರ ಕಿರುತೆರೆ ಪ್ರವೇಶವು ದೇಶಾದ್ಯಂತ ಭಾರೀ ಅಲೆಯನ್ನೇ ಎಬ್ಬಿಸಿದೆ. ಹೀಗಾಗಿ ಅವರ ‘ಸತ್ಯಮೇವ ಜಯತೇ’ ಕಾರ್ಯಕ್ರಮಕ್ಕೆ ದಿಲ್ಲಿ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ನಿಂದ ದಾಖಲಾದ ಒಟ್ಟಾರೆ ಟಿವಿಆರ್ (ಡಿಡಿಯ ವ್ಯಾಪ್ತಿಯೂ ಸೇರಿ) ಪ್ರಮಾಣ 4.27ರಷ್ಟು ದಾಖಲಾಗಿ ದಾಖಲೆ ನಿರ್ಮಿಸಿದೆ. ಮೇ 6ರಂದು ಸ್ಟಾರ್ ಪ್ಲಸ್, ಸ್ಟಾರ್ ಪ್ರವಾಹ್ (ಮರಾಠಿ), ಡಿಡಿ ನ್ಯಾಶನಲ್, ಸ್ಟಾರ್ ಉತ್ಸವ್, ಇ ಟಿವಿ (ತೆಲುಗು), ವಿಜಯ್ (ತಮಿಳು), ಸ್ಟಾಲ್ ಜಲ್ಶಾ (ಬಂಗಾಳಿ), ಸ್ಟಾರ್ ವರ್ಲ್ಡ್ (ಇಂಗ್ಲಿಷ್) ಮತ್ತು ಏಶಿಯಾನೆಟ್ (ಮಲಯಾಳಂ)ಗಳಲ್ಲಿ ಏಕ ಕಾಲದಲ್ಲಿ ಸಹ ಪ್ರಸಾರ ಹೊಂದಿದ್ದ ಈ ಕಾರ್ಯಕ್ರಮವನ್ನು ಭಾರೀ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸಿದ್ದಾರೆ.
ಸತ್ಯಮೇವ ಜಯತೇ ಕಾರ್ಯಕ್ರಮ ವನ್ನು ಸುಮಾರು 8.96 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಟಿಎಎಂ ಮಾಧ್ಯಮ ಸಂಶೋಧನೆಯು ಪೂರೈಸಿರುವ ಅಂಕಿ ಅಂಶಗಳು ತಿಳಿಸಿವೆ ಎಂದು ವರದಿಗಳು ಹೇಳಿವೆ.
ಸಿ ಮತ್ತು ಎಸ್ನ ನಾಲ್ಕಕ್ಕಿಂತ ಮೇಲಿನ ಹರೆಯದ ಗುಂಪಿನಲ್ಲಿ ಕಾರ್ಯಕ್ರಮ ಪ್ರಸಾರದ ಪ್ರಧಾನ ಅವಧಿಯಲ್ಲಿ ಪ್ರದರ್ಶನವನ್ನು ಸುಮಾರು 81,46,000 ಮಂದಿ ವೀಕ್ಷಿಸಿದ್ದಾರೆ. ಎಲ್ಲ ಮಾರುಕಟ್ಟೆಯನ್ನು ಕ್ರೋಢಿಕರಿಸಿದಾಗ, ಪ್ರಧಾನ ಅವಧಿಯ ಪ್ರಸಾರದ ಸಂದರ್ಭ ಕಾರ್ಯಕ್ರಮವನ್ನು 89,60,000 ಮಂದಿ ವೀಕ್ಷಿಸಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.
ಮೊದಲ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ದೂರವಾಣಿ ಕರೆ ಮಾಡಿ ಆಮಿರ್ ಖಾನ್ ಜೊತೆ ಮಾತುಕತೆಗೆ ಮುಂದಾಗುವ ಮೂಲಕ ಈ ಕಾರ್ಯಕ್ರಮವು ಆರಂಭದಲ್ಲೇ ದಾಖಲೆ ನಿರ್ಮಿಸಿತ್ತು. ಒಟ್ಟಾರೆ ದೇಶದಲ್ಲಿ ಆಮಿರ್ ಖಾನ್ರ ಸತ್ಯಮೇವ ಜಯತೇ ಕಾರ್ಯಮವು ಹೊಸ ಸಂಚಲನವನ್ನು ಸೃಷ್ಟಿಸಿದೆ.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...